Tuesday, 15 March 2016

Valentine's day

ಪ್ರೀತಿ?????







ಯಾವ ರೀತಿ????






ಗೋತ್ತಿಲ್ವಾ????






ಹೋಗ್ಲಿ  ಕನಸು ಏನಾದರೂ?????









ಯಾವ ಕನಸು ????







ಅದೂ ಗೋತ್ತಿಲ್ವಾ????









ಆ ಮನಸು???






ಯಾರ ಮನಸು??


ಯಾರದೊ ಹೇಳು ಇಷ್ಟನಾ??




ಬರಿ ಇಷ್ಟನಾ? ??









ಓಹ್ ತುಂಬಾನಾ? ????





ಯಾಕೆ ಇಷ್ಟ ???









ಸುಮ್ನೇನಾ ??








ಸುಮ್ ಸುಮ್ಮನೆನಾ? ???





ನಿಜಾನಾ? ?





ಏನ್ ನಿಜಾ? ?






ಹೇಳಲ್ವಾ? ???







ನಾ ಹೇಳಲೇನು? ?






ಮತ್ತೇನು? ?








ಇವತ್ತೇನು?







ಗೋತ್ತೇನು?












ಇನ್ನೇನು? ????







ಪ್ರೇಮಿಗಳ ದಿನ ಕಣ್ರೀ💝




ಮತ್ತೆ ಇನ್ನ ಯಾಕೆ ತಡ ಮಾಡ್ತಿರಾ





ಪ್ರೀತಿ ಗಾಗಿ💐💝

ಪ್ರೇಮಿಗಳಿಗಾಗಿ 💞




ಪ್ರೇಮಿಗಳ ಹಬ್ಬದ ಶುಭಾಶಯಗಳು💖💕💞💑💝

Thursday, 26 November 2015

ನಾ ಬರೆದ ಉಪ್ಪಿ೨ reviewsu

Present ಲ್ಲಿದ್ದು past ನಾ superfast ಆಗಿ ಮರೆಯೋನೆ ಉಪ್ಪಿ೨
ಉಪ್ಪಿಟ್ಟು ನಷ್ಟೆ ಕಷ್ಟ ಅರಗಿಸಕೊಳ್ಳೊದು ಅದರೂ ಅವನು ಅವನೆ ಉಪ್ಪಿ೨

Pastu presentu and future ಮಧ್ಯ ಇರೋನೆ ಉಪ್ಪಿ೨

ಉಪ್ಪಿಟ್ಟು ಮಾಡೊರಿಗೆ ಸುಲಭ ಅದರೆ ತಿನ್ನೊನಿಗು ಗೊತ್ತು ಅಂತ ಕಡಕ್ ಆಗಿ ಹೇಳೊನೆ ಉಪ್ಪಿ೨

ಇಂದು ನೆಮ್ಮದಿಯಿಂದಿರುವಾಗ
ನಾಳೆಯ ಚಿಂತೆಯೇಕೆ
ಈ ಕ್ಷಣ ಖುಷಿಯಾಗಿರುವಾಗ
ಮರು ಕ್ಷಣದ ಗೊಡವೆಯೆತಕೆ ಅನ್ನೊನೆ ಉಪ್ಪಿ೨

ತಲೆ ಕೆಳಗೆ ಮಾಡಿ ಕಾಲು ಮೆಲೆ ಮಾಡಿದರು ನಾನು ನಿನಾಗಲ್ಲಾ ಅನ್ನೊನೆ ಉಪ್ಪಿ೨

Rajanikanth jokes Tara agatta uppi2

Gigabytes ಸಾಕಗಾಲ್ಲ  Terabyte speed ಲಿ ಯೊಚನೆ ಮಾಡಿದ್ರೆ  sai ಅರ್ಥ ಆಗೊದು ಉಪ್ಪಿ೨😅

ಆದರೂ ಇರುವೆ ಬಿಡ್ಕೊಳದು ಯಾಕೆ ಅಂತ ಯೋಚನೆ ನಿಲ್ಸೊನೆ ಉಪ್ಪಿ೨

👌ಗಿಂತ 👌ಹಾಗಿರೊ ನೆ ಉಪ್ಪಿ೨

ಉಪ್ಪಿಟ್ಟು ತಿಂತ ನಾ ಬರೆದ ಉಪ್ಪಿ೨ Reivewsu.

-ಮೋಹನ್ ಹಾದಿಕೆರೆ

Wednesday, 25 November 2015

What is intolerance

You feel intolerance only when

Read morning news paper? ?

Watching news channels? ?

Finally Facebook posts? ??
If so? ?
I feel Media is just highlighting and changing people statements to increase their TRP nothing more than that.

Please first boykott all the above. You feel really happy and peaceful.

Our beloved PM Narendra Modi ji is visiting foreign countries to spread what is good in India and telling people its great place to live and also to invest.
Please think the possible ways to help for better India and for the better future.

Its not just our PM alone responsible for the nations growth and developments ,its people of nation we should join hands irrespective of religion and region.

Finally my sincere request
Dear media simply don't spread nonsense talks and speeches.

Share if you agree ..

# icantolerate this media anymore

-- ಮೋಹನ್ ಹಾದೀಕೆರೆ

Sunday, 8 November 2015

ಜೀವಕ್ಕೆ ಬೆಲೆಕಟ್ಟಲಾಗದು ಜೀವನಕ್ಕೆ ಬೆಲೆಕಟ್ಟಲೇಬೇಕು

ದೀಪದಿಂದ ದೀಪವ ಹಚ್ಚಬೇಕು ಮಾನವ...
ದೀಪದಿಂದ ಪಠಾಕಿಯನ್ನಲ್ಲ ಓ ಮಾನವ ..
ಆ ದೇವರ ಸ್ರುಷ್ಟಿಯ ಎಲ್ಲಾ ಜೀವಿಗಳಿಗೂ ಈ ಭೂಮಿಯ ಮೇಲೆ ಮಾನವನಿಗೆ ಎಷ್ಟು ಹಕ್ಕು ಇದಿಯೊ ಅಷ್ಟೇ ಹಕ್ಕಿದೆ ..ಆದರೆ ವಾಸ್ತವ ನೇ ಬೇರೆಯಾಗಿದೆ ..ಯಾರು ಹೆಚ್ಚು ಬಲಿಷ್ಟರೋ ಅವರಿಗಷ್ಟೇ ಈ ಭೂಮಿಯ ಮೇಲೆ ಜಾಗ. ಅದೇ ತರಹ ಮಾನವ ಬಲಿಷ್ಟನಾದ್ದರಿಂದ ಅವನು ಇನ್ನೊಂದು ಜೀವಿಯ ಲೆಕ್ಕಕ್ಕೆ  ಇಡದಂತಹ ಪರಿಸ್ಥಿತಿಯಿದೆ... ಅನ್ಯ ಜೀವಿಗಳು ಬದುಕಿದರೆಷ್ಟು ಸತ್ತರೆಷ್ಟು ...ಈ ಕಾನೂನುಗಳನ್ನು ಮಾಡಿಕೊಂಡವರು ಮಾನವರೆಂಬುದನ್ನು ಮರೆಯಬಾರದು ..ಕೆಲವರಂತು ನಾವು ಏನನ್ನು ಬೆಕಾದರು ತಿನ್ನುತ್ತವೆ ಕೇಳೊಕೆ ನೀವ್ಯಾರು ಅಂತ ಹೇಳಿದ್ದು ಉಂಟು. ಹೌದು ನಮಗೆ ಕೇಳುವುದಕ್ಕೆ ಹಕ್ಕಿಲ್ಲ ಅಂದೆ ಇಟ್ಟು ಕೋಳ್ಳೊಣ ..ನಾಳೆ ಮಾನವನನ್ನು ತಿನ್ನುವ ಂತೊರು ಬಂದರೆ ಹಾಗ ಅವರನ್ನು ಯಾರು ಕೇಳದೇ ಸಮ್ಮನೆ ಇರ್ತಿರಾ ..ಕೇಳೊದು ಇರಲಿ ಮರುಕ್ಷಣದಲ್ಲಿ ಅವರ ಬಲಿಯಾಗಿರತ್ತದೆ ..ಮಾನವನಿಗಷ್ಟೆ favor ಹಾಗಿರೊ ಈ ಕಾನೂನಿಗೆ ನನ್ನ ಧಿಕ್ಕಾರ ...

ಸಕಲ ಪ್ರಾಣಿಗಳಲ್ಲಿ ದಯೆಯಿರಲಿ ...
ದಯವೇ ನಮ್ಮ ಧರ್ಮದ ಮೂಲ ಎನ್ನುವುದನ್ನ ನಾವು ಮರೆಯಬಾರದು.
ಎಲ್ಲಾ ಪ್ರಾಣಿಗಳ ಮೇಲೆ ದಯೆಯ ಮಾತನ್ನು ಕೊಂಚ ಸಮಯ ಬದಿಗೊತ್ತಿ.

ನಮಗೆ ಹುಟ್ಟಿದ ದಿನದಿಂದ ಸಾಯುವವರೆಗೂ ಅನೂಕೂಲವಾಗಿರುವ ನಮ್ಮ ತಾಯಿಗು ಮಿಗಿಲಾದ ನಮ್ಮ ಗೊಮಾತೆಯ ರಕ್ಷಣೆ ಯೇ ದೊಡ್ಡ ಸಮಸ್ಯಯಾಗಿ ಉಲ್ಬಣಿಸಿದೆ .ಇದನ್ನು ನಾ ಹೇಳಿದರೆ ನಾನು ಕೋಮುವಾದಿ ಎಂದು ಪಟ್ಟ ಕಟ್ಟಿದರು ದೊಡ್ಡ ಆಶ್ಚರ್ಯವಿಲ್ಲ. ಇಲ್ಲಿ ತಿನ್ನುವುದಕ್ಕೆ ಯಾವ ಧರ್ಮದ ಭಯವಿಲ್ಲ ಕೇಳುವುದಕ್ಕು ಯಾರಿಗು ಹಕ್ಕಿಲ್ಲವೆಂದೆ ಇರಲಿ.ಒಂದು ಧರ್ಮದ ಜನರನ್ನು ಗುರಿಯಾಗಿಸುವುದು ತಪ್ಪಾಗುತ್ತದೆ. ಅವರ ಆಹಾರ ಪದ್ದತಿಯನ್ನು ಕೇಳುವ ಹಕ್ಕು ನಮಗಿಲ್ಲ ನಿಜ.ಯಾಕೆಂದರೆ ಯಾರು ಸಮಾಜದ ಶಾಂತಿ ಕಾಪಡಬೇಕೊ ಅವರ ಬಾಯಲ್ಲೆ ಇಂತಹ ಮಾತುಗಳು ಸಾಮಾಜಿಕವಾಗಿ  ನಾವು ತಿನ್ನುತ್ತವೆ ಕೇಳೊಕೆ ನೀವ್ಯಾರು ಎಂದು ಹೊರಬಂದ ನಂತರವು  ನಾವು ಯಾರನ್ನೊ ದೂರುವಂತಿಲ್ಲ.
ನಮ್ಮ ಹಿರಿಕರು ಹೇಳಿದ ಹಾಗೆ
ಕೊಂದಲ್ಲಿ ಪಾಪ ತಿಂದಲ್ಲಿ ಹೋಗುತ್ತದೆ ಅಂತ ..ಯಾಕಪ್ಪ ಈ ಮಾತು ಇಲ್ಲಿ ಬಂತು ಅಂತ ಕೇಳಬಹುದು ..

ಕಾಡಿಗೇ ಹಸುಗಳು ಹೋದಾಗ ಅದನ್ನು ಹಿಡಿದು ತಿಂದ ಹುಲಿಗೆ ಪಾಪದ ಭಯವಿಲ್ಲವೇ ಎಂದು ಕೇಳಿದಾಗ ಬಂದ ಮಾತಿದು ..ಅದಿರಲಿ ಬಿಡಿ ಎಲ್ಲ ತಿಳಿದ ಮಾನವನಿಗೆ ಆ ಭಯವಿಲ್ಲ ಎಂದಾಗ ಕಾಡುಪ್ರಾಣಿ ಗೆ ಇಲ್ಲ ಎಂಬುದರಲ್ಲಿ ಎರಡು ಮಾತಿಲ್ಲ ...

ಕೆಲವರಂತೂ ಇವರು ಹೀಗೆ ಬಾಯಿಗೆ ಬಂದ ಹಾಗೆ ಹೇಳಿದರೆಂದು ಮತ್ತೊಂದು ಜೀವಿಯ ಬಲಿಕೊಟ್ಟು ಅದನ್ನು ಇವರಿಗೆ ಕಳುಹಿಸದ್ದಾರೆ ಎಂದು ನಾನು ನ್ಯೂಸ್ ಪೇಪರಲ್ಲಿ ಓದಿದುಂಟು ...ಇಂತಹ ಬುದ್ಧಿ ಜೀವಿಗಳು ಉಂಟು ನಮ್ಮ ಸಮಾಜದಲ್ಲಿ.

ಹಸುಗಳು ಸಾಕುವುದು ಹಾಲಿಗಾಗಿ ಹೊರತು ತಿನ್ನುವುದಕ್ಕಲ್ಲ ಅನ್ನೋದು ನನ್ನ ವಾದವಷ್ಟೆ.ಅದರಲ್ಲಿಯೂ ನಮ್ಮ ಕಾನೂನಿಲ್ಲಿ ಅವಕಾಶವಿದ್ದರೆ ತಿನ್ನಿ ಅದಕ್ಕೆ ನಮ್ಮ ತಡೆಯಿಲ್ಲ. ಎಷ್ಟೇ ಹಾಗಲಿ ನಾವು ಮಾಡಿಕೊಂಡಿರೊ ಕಾನೂನಲ್ಲವೇ ಮಾನವನಿಗೆ ತಕ್ಕಂತೆ ಕಾಲ ಕಾಲಕ್ಕೆ ಹೇಗೆ ಬೇಕಾದರು ಬದಲಾಯಿಸಿ.
ಒಂದನ್ನು ನೆನಪಿನಲ್ಲಿ ಡಿ ..ಯಾವುದೆ ಪ್ರಾಣಿಯಾಗಲಿ ಹಿಂಸೆ ಮಾಡದೆ ಕೊಂದು ತಿನ್ನುವ ಕನಿಷ್ಠ ಕನಿಕರ ನಾದರು ತೊರುವ ಪ್ರವೃತ್ತಿಯನ್ನು ಬೆಳಸಿಕೊಳ್ಳಿ.ತಿನ್ನುವ ಪ್ರತಿ ಆಹಾರವು ದೇವರಿಗೆ ಸಮಾನ ಅದಕ್ಕೆ  ಅನ್ನ ದೇವೊ ಸುಖೀಭವ ಎನ್ನುವುದು.

ನಮ್ಮ ಸುವರ್ಣ ಚಾನೆಲ್ ನವರು ಮಾಡಿದ ರಹಸ್ಯ ಕಾರ್ಯಾಚರಣೆ ನೋಡಿದರೆ ಗೋವುಗಳನ್ನು ಯಾವ ರೀತಿಯಲ್ಲಿ ಸಾಗಿಸ್ತಾರೆ ಅದನ್ನು ಹೇಗೆ ನಡೆದುಕೊಳ್ತಾರೆ ಅಂತ ಗೊತ್ತಾದರೆ ತಿನ್ನುವವರು ಮತ್ತು ಹಾಲುಂಡು ಮುದಿಯಾದ ಹಸುಗಳನ್ನು ಬಿಡಿಗಾಸಿಗಾಗಿ ಮಾರುವವರು ಎರಡು ಬಾರಿ ಯೋಜನೆ ಮಾಡಬೇಕು ..ಕನಿಷ್ಠ ಕನಿಕರನಾದರು ತೊರಿಸದರೆ ಸ್ವಲ್ಪ ಪುಣ್ಯವಾದರು ತಮ್ಮ ಪಾಲಿಗೆ ಬರುತ್ತದೆ. ಪಾಪ ಪುಣ್ಯಗಳ ಎಣಿಸುವ ಕಾಲವಲ್ಲವಾದರು ಮಾನವೀಯತೆ ದ್ರಷ್ಟಿಯಿಂದ ಬದಲಾಗಿ. ಅಂದಹಾಗೆ
ಮಾನವೀಯತೆ ಅನ್ನುವ ಪದ ಮಾನವಿಗಷ್ಟೇ ಸೀಮಿತ ಪ್ರಾಣಿಗಳಿಗಲ್ಲ ಯಾಕೆಂದರೆ ಪ್ರಾಣಿಗಳಗಳಿಗೆ ಪ್ರಾಣೀಯತೆ ಪ್ರ ಕೃತಿ ಸತ್ಯವಾಗಿ ಬಂದಿದೆ ಅದಕ್ಕೆ ಅವುಗಳು ಪ್ರಾಣಿಗಳು ನಾವು ಯೊಚನೆಯುಳ್ಳವರು ತುಂಬಾ ಯೋಚನೆ ಮಾಡಿ ನಮ್ಮ ಮಾನವೀಯತೆ ಯನ್ನ ದಿನೇ ದಿನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಒಂದು ಜೀವ ಉಳಿಸಿಕೊಳ್ಳಲು ನಾವು ಎಷ್ಟೆಲ್ಲಾ ಹರಸಾಹಸ ಪಡುತ್ತಾ ಇದ್ದೇವೆ. ಅದರೆ ಅನ್ಯ ಜೀವಿಗಳೆಂದರೆ ಅಸಡ್ಡೆ. ತಮ್ಮ  ಅಥವಾ ತಮ್ಮ ಸಂಭಂದಿಗಳ ಮ ಜೀವಕ್ಕೆ ಕುತ್ತು ಬಂದಾಗ ಮಾತ್ರ ಗೊತ್ತಾಗೊದು ಒಂದು ಜೀವದ ಬೆಲೆ. ಮಾನವ ಇಂದು ತನ್ನ ಜೀವ ಉಳಿಸಿಕೊಳ್ಳಲು ಕೊಟಿಗಟ್ಟಲೆ ಸುರಿಯುತ್ತಿದ್ದಾನೆ ನಾನ ರೊಗಗಳಿದೆ ತುತ್ತಾಗಿ .ಕೊಟಿ ಸುರಿದು ಉಳಿಸುವ ಪ್ರಯತ್ನ ...ಕೊಂಚ ಯೊಚಿಸಿದರೆ ಉಳಿಸುವ ಇನ್ನೊಂದು ಜೀವಿಗೆ ದಯವಿಟ್ಟು ತೋರಿ.ಒಂದು ಇರುವೆಯ ಜೀವ ತಿಂಗಳಿರಬಹುದು ಅದು ಅದಕ್ಕೆ ಹೆಚ್ಚು. ಸುಮ್ಮನೆ ಯಾವತ್ತು ಗೊತ್ತಿದ್ದು ಒಂದು ಜೀವದ ಜೊತೆ ಆಟ ಬೇಡ. ಒಂದನ್ನು ನೆನಪಿಡಿ ಜೀವಕ್ಕೆ ಎಂದೂ ಬೆಲೆಕಟ್ಟಲಾಗದು ಆದರೆ ನಮ್ಮ ಪ್ರತಿದಿನದ  ಜೀವನಕ್ಕೆ ಬೆಲೆಕಟ್ಟಲೇಬೆಕು. ನಾನು ಮಾನವನೇ ..ನಾನು ಉಡುವ ತೊಡಿಗೆಯೊ ಹಾಕುವ ಚಪ್ಪಲಿಯೊ ಓಡಾಡುವ ವಾಹನವೊ ಯಾವುದಾದರೂ ಒಂದು ರೀತಿಯಲ್ಲಿ ಅನ್ಯಜೀವಿಯ ಹಿಂಸೆಗೆ ಒಂದು ರೀತಿಯಲ್ಲಿ ಕಾರಣ.ನನ್ನ ಹಾಗೆ ಎಷ್ಟೋ ಮಂದಿ ಇದ್ದಾರೆ. ಇಂದೇ ಪ್ರತಿಘ್ನೆ ಮಾಡು ಮಾನವ.. ತನ್ನ ತಿಳುವಳಿಕೆ ಬಂದಂತೆ ಯಾವ ಜೀವಿಗು ತೊಂದರೆ ಕೊಡುವುದಿಲ್ಲವೆಂದು. ಆದರೂ ಈ
ಮಾನವಿನಿಗೆಂದು ನನ್ನ ಧಿಕ್ಕಾರ.

-ಮೋಹನ್ ಹಾದೀಕೆರೆ

Thursday, 5 November 2015

ಮೂರಕ್ಕೆ ಮುಕ್ತಾಯ-ಪರಿಚಯ

ಮೂರಕ್ಕೆ ಮುಕ್ತಾಯ :

ನಾನು ಕಾಯ್ಸೋದು ..ನೀವು ಕಾಯೋದು..
ನಾನು ಬರಿಯೋದು ನೀವು ಓದದೆ ಇರೋದು ..ನಿಜವಾಗಾಲು ಹೇಳ್ಳ ..ನೀವು ಓದಿದರೆ ಓದಿ ಬಿಟ್ಟರೆ ಬಿಡಿ ನಾನು ಮಾತ್ರ ನಿಮ್ಮ ನು ಕಾಯಿಸಿನೆ ಬರಿಯೋದು ..ಯಾವದಕ್ಕಾದರು ನಾವು ಕಾಯಲೇಬೇಕು ..ಕೆಲವರು ಒಳ್ಳೆಯ ಸಮಯ ಬಂದೇ ಬರತ್ತೆ ಅಂತ ಕಾದರೆ ..ಇನ್ನು ಕೆಲವರು ಕೆಟ್ಟ ಕಾಲ ಕಳೆಯೊದು ಯಾವಾಗ ಅಂತ ಕಾಯ್ತಾರೆ ..ನಮ್ಮ ಐಟಿ ಹುಡುಗರು ಬೆಂಗ್ಳೂರು ಟ್ರಾಫಿಕ್ ಜಾಮ್ ಸಮಸ್ಯಗೆ ಯಾವಾಗ ಕೊನೆ ಅಂತ ಕಾಯ್ತಾ ಇದಾರೆ ...ನನ್ನ ಕೇಳಿದ್ರೆ ಬೆಂಗಳೂರಿಗೆ ನೆ ಅವಮಾನ ಇಲ್ಲಿ  ಟ್ರಾಫಿಕ್ ಗೆ ಒಂದು ಪರಿಹಾರ ಸಿಕ್ಕರೆ. ನಾ ಹೇಳ್ಳ ನೀವು ಈ ಊರನ್ನ ಬಿಟ್ರು ...ಟ್ರಾಫಿಕ್ ಅನ್ನೋ ಪೆಡಂಬೂತ ಈ ಊರನ್ನು ಬಿಡೋಲ್ಲ ..ನಾನಂತು ಯಾವಾಗ ಈ ಭೂತದಿಂದ ತಪ್ಪಿಸ್ಕೊಂಡು ನಮ್ಮ ಊರು ಕಾಣೊ ತನಕ ಓಡಿ ಹೋಗ್ತಿನೊ ಗೊತ್ತಿಲ್ಲ...ಈ ವಾಸ್ತವ ಗೊತ್ತಿರೊರಿಗೆ ಗೊತ್ತು... ಇಲ್ಲದೇ ಇರೊರಿಗೆ ಗೊತ್ತಾಗೊದು ಬೇಡ. ನಾವು ನಮ್ಮ ಕನ್ನಡ ಮೇಷ್ಟ್ರು ಪಾಠ ಮಾಡೋದು ಯಾವಾಗ ಮುಗಿಸ್ತಾರೆ ಅಂತ ಕಾಯ್ತಿದ್ವಿ. ಒಂದೇ ಪಾಠವನ್ನ ಮೂರು ಬಾರಿ ಮಾಡಿ ಬೋರ್ ಹೊಡಿಸ್ತಾ ಇದ್ದರು ಅದಕ್ಕೆ ಅವರಿಗೆ ಬೊರವೆಲ್ ಮಾಸ್ಟರ್ ಅಂತ ನಾಮಕರಣ ಮಾಡಿದ್ದು ಉಂಟು.ಮೂರು ಅನ್ನೊ ಸಂಖ್ಯೆ ಗೆ ಏನೊ ಒಂತರಾ ಶಕ್ತಿ ಇರಬಹುದಾ ಅಂತ ನಂಗೇನು ..ಎಲ್ಲರಿಗು ಅನುಭವ ಹಾಗಿರಬಹುದು ...ಆ ಮುಕ್ಕಣ್ಣ ನ ಮೂರನೇ ಕಣ್ಣು ಬಿಟ್ಟಿರೊದನ್ನ ನಾನು ನೋಡಿಲ್ಲ ಆದರೆ ನಾನು ನನ್ನ ಪರಿಚಯ ಮುಗಿಸದೇ ಹೋದರೆ ನಮ್ಮ ಹುಡುಗರೇ ಆ ಕಣ್ಣು ತೆರೆದರು ಆಶ್ಚರ್ಯ ಇಲ್ಲ ..ಯಾಕೆಂದರೆ ನಾವೆಲ್ಲ ಆ ಶಿವ ಭಕ್ತರಲ್ಲವೇ ಅವನಿಗೆ ಇರೋ ಕೋಪ ತಾಪಗಳು ಅವನ ಭಕ್ತರಿಗೆ ಇರೊದರಲ್ಲಿ ಎರಡು ಮಾತಿಲ್ಲ.
ಮೂರಕ್ಕೆ ಮುಕ್ತಾಯ ಅನ್ನೊ ನಂಬಿಕೆ ನಮ್ಮ ಹಲವರಲ್ಲಿ ಬೇರೊರಿದೆ.ಏನಿಕ್ಕೆ ಇರಬಹುದು ಅಂತ ನನ್ನ ಕೇಳಿದ್ರೆ ಹೇಳೋದು ನನಗೆ ತಿಳಿದಿರೊ ಹಾಗೆ ಇರೋದು ಮೂರು ಲೋಕ( ಪಾತಳಲೊಕ, ಭೂಲೋಕ, ದೇವಲೋಕ) ಮೂವತ್ತ ಮೂರು ಕೋಟಿ ದೇವತೆಗಳು.

ಕೊನೆಯದಾಗಿ ನನ್ನ ಈ ಕಿರು ಪರಿಚಯಾನ ಮುಗಿಸಲಬೆಕು..ನಾನೊಬ್ಬ ಮೆಕ್ಯಾನಿಕಲ್ ಇಂಜಿನಿಯರ್ ...ಓದಿದ್ದು ಬಸವನಗುಡಿಯ ದೊಡ್ಡ ಬಸವನ ಹತ್ತಿರ ಇರುವ  ಬಿ.ಎಂ. ಎಸ್ ಕಾಲೇಜಿನಲ್ಲಿ. ಇದ್ದಿದ್ದು ನಮ್ಮ ಬೆಂಗಳೂರಿನ ರೈಲ್ವೆ ನಿಲ್ದಾಣ ಪಕ್ಕನೆ ಇರೊ ನಮ್ಮ ಶ್ರೀ ರಾವ್ ಬಹದ್ದೂರ್  ಗುಬ್ಬಿ ತೋಟದಪ್ಪ ಛತ್ರದಲ್ಲಿ. ನೂರಾರು ವರುಷಗಳಿಂದ ಉಚಿತವಾಗಿ ವಸತಿ ಕಲ್ಪಿಸುತ್ತಿರವ ವಿದ್ಯಾರ್ಥಿನಿಲಯ.ನಾನು ಬಿ.ಎಂ.ಎಸ್  ಕಾಲೇಜಿನ ವಿದ್ಯಾರ್ಥಿ ಅಂತ ಹೇಳಿಕೊಳ್ಳೊದಕಿಂತ ತೋಟದಪ್ಪ ಹಾಸ್ಟೆಲ್ ನ ವಿದ್ಯಾರ್ಥಿ ಅಂತ ಹೇಳೊದು ಒಂದು ಹೆಮ್ಮೆಯ ವಿಚಾರ. ಯಾಕೆ ಅಂತ ಕೇಳ್ತಿರಾ ...ಆದರೆ ಅದನ್ನ ಹೇಳೊಕೆ ಒಂದು ಎರಡು ವಾಕ್ಯಗಳು ಸಾಕಾಗೊದಿಲ್ಲ ಅನ್ನೋದು ನನ್ನ ಭಾವನೆ.

ತದನಂತರ ಮರೆತರೂ ಮರೆಯಲಾಗದ ಎರಡು ವರುಷ ಮದ್ರಾಸಿನ ಐ.ಐ.ಟಿ ಯಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ. ಅದೇನು ಮರೆತರು ಮರೆಯಲಾಗದ ನೆನಪು ಅಂತ ಕೇಳ್ತಿದಿರಾ ನನ್ನ ಮುಂಬರುವ ಕೃತಿ ಗಳಲ್ಲಿ ಒಂದಾದ "ಜಿಂಕೆಯ ಜೊತೆ ಜೊತಗೆೆ" ಯನ್ನು ಓದಿ ನಿಮಗೆ ಅರ್ಥ ಹಾಗಬಹುದು ಅದೇನಿರಬಹುದು ಮರೆಯಲಾಗದ ನೆನಪು ಅಂತ.

Saturday, 31 October 2015

ಪರಿಚಯ -ಅಂಕಣ೨

ಕಾದು ಕಾದು ಸಾಕಾಯ್ತಾ ....ಏನ್ ಮಾಡೋದು ನಾ ಮೊದಲೆ ಹೇಳಿದ ಹಾಗೆ ಸಮಯಕ್ಕೆ ಬೆಲೆ ಕೊಟ್ಟು ನನ್ನ ಪರಿಚಯನ ನಿಲ್ಲಿಸಿದ್ದೆ. 
ಕಾಯೊದು ಅಂದಕೂಡಲೆ ನಂಗೆ ನೆನಪಾಗೊ ಒಂದು ಸಣ್ಣ ಕವನ ಹೇಳ್ತಿನಿ ಕೇಳಿ...

"ಹಸಿದವನಿಗೆ ಗೊತ್ತು ಹಸಿವಿನ ಚಿಂತೆ
ಕಾಯೊನಿಗೆ ಗೊತ್ತು ಕಾಡುವ ಚಿಂತೆ
ನಮಗೇಕೆ ಬೇಕು ಈ ಚಿಂತೆಗಳ ಸಂತೆ"

ಇಲ್ಲಿ ಕವಿ ಹಸಿವು ಮತ್ತು ಕಾಯುವಿಕೆ ಯಾಕೆ ಹೋಲಿಕೆ ಮಾಡತಾ ಇದಾನೆ ಅನ್ನೋದು ನಿಮಗೆ ಗೊತ್ತಾಗಿದೆ ಅಂತ ಅಂದ್ಕೊಂಡ್ರು ಹೇಳೊದು ನನ್ನ ಧರ್ಮ.
ಹಸಿವು ಇದ್ದಾಗ ಚಿಂತೆಗಳು ಬರೊದು ಮತ್ತು ಯಾರಿಗಾದರು ಕಾಯಬೇಕಾದರೆ ಚಿಂತೆಗಳು ಕಾಡೊದು ಸಹಜ ಅಂತ ಅಷ್ಟೇ.

ನೋಡಿ ನಮ್ಮ ಹುಡುಗರಿಗೆ ಒಂದೆ ಒಂದು ಇಷ್ಟ ಹಾಗಿಲ್ಲ ಏನದು ಅಂತ ನೀವು ಕೇಳೆ ಕೆಳ್ತಿರ ಅದಕ್ಕೆ ಹೇಳಬಿಡ್ತಿನಿ. ಈ ಟಾಪಿಕ್ ನಾ ಬದಲಾಯಿಸೊದು ಅದಕ್ಕೂ ನಾನು ಮಧ್ಯ ಮಧ್ಯ ನನ್ನ ಟಾಪಿಕ್ ನ್ನ ಬದಲಾಯಿಸೊದಕ್ಕು ಒಂದು ಕಾರಣವಿದೆ. ನಾ ಬರೆಯೊ ಪ್ರತಿ ಪದಕ್ಕು ಅರ್ಥ ಕಲ್ಪಿಸಬೇಕು ಅನ್ನೋದು ನನ್ನ ವಾದ.
ಇರಲಿ ನಮ್ಮ ವಿಷಯಕ್ಕೆ ಬರೋಣ ...ಬರುವವರು ಬನ್ನಿ ಬಾರದೆ ಇರೋರು ಬೇಡ ..ಎಲ್ಲಾ ಬಂದೆ ಬರ್ತೀರಾ ಅಂತ ನನಗು ಗೊತ್ತು ...

ಪರಿಚಯ ಅನ್ನೋದು  ತುಂಬಾ ತೂಕವಿರೊ ಪದ. ಪರಿಚಯನಾ ಪರಿಚಿತ ಮಾಡಲೇಬೇಕು...

ಕಾಲೇಜಿನಲ್ಲಿ ಇದ್ದಾಗ ಅದರಲ್ಲೂ ಹುಡುಗರ ಗುಂಪು ಇದ್ದಾಗ ಯಾವುದಾದರೂ ಒಂದು ಸುಂದರ ಹುಡುಗಿಯನ್ನ ಕಂಡರೆ ಅದರಲ್ಲೊ  ನನ್ನ ಂತೊನು ಆ ಗುಂಪಲ್ಲಿದ್ರೆ ನಾನೆದರು ಹಾ ಹುಡುಗಿ ನಂಗೆ ಗೊತ್ತು ಕಣ್ರೊ ಅಂದ್ರೆ ಮುಗೀತು ..ಹಾ ಹುಡುಗೀನ ಪರಿಚಯ ಮಾಡ್ಸೊ ತನಕ ಬಿಡೋಲ್ಲ ನಮ್ಮ ಹುಡುಗರು. ಹಾಗೆ ಒಂದು ಸಲ ಸುಮ್ನೆ ಗೊತ್ತು ಅಂತ ಹೇಳಿ ನಮ್ಮ ಹುಡುಗರ ಹತ್ತಿರ ಪೇಚಾಡಿದ್ದು ಉಂಟು.  ಏನಪ್ಪ ಇವನು ಹುಡಗರ ಲೆವೆಲ್ ಕಡಿಮೆ ಮಾಡ್ತಿದಾನೆ ಅಂತ ಒಬ್ಬನೇ ಸಿಗು ಇದೆ ನಿಂಗೆ ಅಂತ ಎಷ್ಟೊ ನನ್ನ ಆತ್ಮಿಯರು ಮನಸಲ್ಲೆ ಅಂದ್ಕೊಂಡಿರಬಹುದು..
ಆದರೆ ಇದಕ್ಕೆ ಹುಡುಗೀರು ಏನು ಹೊರತಾಗಿಲ್ಲ.
ಹಾ ಕಾಲೇಜಿನ ದಿನಗಳೇ ಹಾಗೆ ..ನಮಗೆ ಗೊತ್ತಿದ್ದೊ  ಗೊತ್ತಿಲ್ದೆನೊ ಹಾಗೆ ಮಾಡೋದು ಸಹಜ.
ಪರಿಚಯ ಒಂದು ಬಿಟ್ಟು ಎಲ್ಲಾ ಮಾತಾಡ್ತಾ ಇದಾನೆ ಅಂತ ಕೆಲವರಿಗೆ ಸಿಟ್ಟು ಬಂದಿರಬೇಕು ...ಏನ್ ಮಾಡಲಿ ನಾನಿವಾಗಲೇ ನನ್ನ ಮುಂದಿನ ಪರಿಚಯನಾ ಮಾಡಿದರೆ ನನ್ನ ಬ್ಲಾಗ್ ಕಡೆ ಮತ್ತೆ ತಿರುಗೆ ಸಹ ನೊಡೊಲ್ಲ ನಮ್ಮ ಹುಡುಗರು.
ಅಂದಹಾಗೆ ನನ್ನ ಪರಿಚಯ ..ಪರಿಚಯ ಇರೊರಿಗೆ ಅಲ್ಲಾ..ಅಪರಿತರಿಗೆ ಮಾತ್ರ ನನ್ನ ಪರಿಚಯ.ಯಾಕೆಂದರೆ ನನ್ನ ಪರಿಚಯ ನಿಮಗೆಲ್ಲಾ ಇದಿಯಲ್ಲಾ...ಅಪರಿಚಿತರೇ ನನ್ನ. ಮುಂದಿನ ಪರಿಚಯ ನಿಮಗೆ ಹಾಗಬೇಕಾ ...
ಹಾಗಿದ್ದರೆ ನನ್ನ ಈ ಎರಡನೆ ಪರಿಚಯ ನ ಇಲ್ಲಿಗೆ ಮುಗಿಸೊಣವಾ ...ನನ್ನ ಮೂರನೆ ಪರಿಚಯದ ಅಂಕಣದಲ್ಲಿ ಖಂಡಿತ ಮುಕ್ತಾಯ ಮಾಡ್ತೇನೆ ಈ ನನ್ನ ಪರಿಚಯಾನ..

ಮುಗಿಸೊಣ ಅಂದರೆ ಮಾತ್ರ ಮುಗಿಸೊಣ ಇಲ್ಲಾ ಅಂದರೆ ಬೇಡ....ಏನಂತಿರಾ...????

ಅಂದಹಾಗೆ ನಾನು ನಾಳೆ ಸೂರ್ಯನ ವಾರ ಭಾನವಾರ ನಾನಂತೂ ಈ ಜನರ ಜಂಜಾಟ ಸಾಕಾಗಿ ..ಪಶ್ಚಿಮ ಘಟ್ಟದ ಮಡಿಲಿಗೆ ಹೋಗ್ತಾ ಇದೀನಿ ..ಅದರ ಬಗ್ಗೆ ನೂ ಬಂದ ನಂತರ ನನ್ನ ಅನುಭವ ನಾ ನಿಮ್ಮೆಲ್ಲರ ಹತ್ತಿರನು ಹಂಚಿಕೊಳ್ತೇನೆ.

ಸರೀ ....ಅಲ್ಲಿತನಕಾ ಕಾಯ್ತಾ ಇರೀ...
ಎಲ್ಲರಿಗೂ Happy Sunday ....

Thursday, 29 October 2015

ಪರಿಚಯ .....ಅಪರಿಚಿತರಿಗೆ ನನ್ನ ಪರಿಚಯ

ನನ್ನ ಬಗ್ಗೆ ಸಣ್ಣದಾಗಿ ಒಂದು ಪರಿಚಯ ಮಾಡಿಕೊಟ್ಟ ನಂತರ ನನ್ನ ಮುಂದಿನ ಕೃತಿಗಳನ್ನ ನಿಮ್ಮ ಮುಂದೆ ಇಡೊಣ ಅನ್ನೊದು ನನ್ನ ಆಶಯ.
ನನ್ನ ಹೆಸರು ಗೊತ್ತಿರೊರಿಗೆ ಗೊತ್ತು ಗೊತ್ತಿಲ್ಲದೇ ಇರೊರಿಗೆ ಗೊತ್ತಿಲ್ಲ ಅನ್ನೋದು ನಿಮಗು ಗೊತ್ತು. ಏನಪ ಇವನು ಪರಿಚಯದಲ್ಲೆ ಇಷ್ಟೊಂದು ಕಷ್ಟ ಕರವಾಗಿ ಪರಿಚಯ ಮಾಡ್ಕೊಳ್ತ ಇದಾನೆ ಅಂದ್ಕೊಳ್ಳಬೇಡಿ. ಅದಕ್ಕೂ ಒಂದು ಕಾರಣ ಇದೆ, ಏನೂ ಅಂತೀರಾ ನಾನು ಬರೆಯೊ ಕವನಗಳಾಗಲಿ ಕೃತಿಗಳಾಗಲಿ ಅರ್ಥವಾಗೊದು ಸ್ವಲ್ಪ ಕಷ್ಟ.ಸರಿ ವಿಷಯಕ್ಕೆ ಬರೋಣ,  ಬಂದ್ರಾ? ?
ಬಂದಿದಿರಾ ಅಂದ್ಕೊಂಡು ಮುಂದೆ ಹೋಗ್ತೀನಿ. ಏನ್ ಹೇಳ್ತಾ ಇದ್ದೆ ...ಹಾ ಪರಿಚಯ ..ನನ್ನ ಪರಿಚಯ ...ಅಪರಚಿತರಿಗೆ ನನ್ನ ಪರಿಚಯ.

ನನ್ನ ಹೆಸರು ಮೋಹನ್ ..ನಮ್ಮೂರು ಹಾದೀಕೆರೆ. ನಮ್ಮ ಊರಿಗೆ ಹೋಗುವ ಹಾದಿಯಲ್ಲಿ ಕೆರೆ ಇರೊದ್ರಿಂದ ಹಾದಿಕೆರೆ ಅಂತ ಇಟ್ಟಿದ್ದಾರೆ ನಮ್ಮ ಹಿರಿಕರು. ನಾ ಹುಟ್ಟಿದ ಊರನ್ನ ಯಾವತ್ತು ಮರಿಬಾರದು ಅಂತ ನನ್ನ ಹೆಸರು ಮುಂದೆ ನಮ್ಮೂರು ಹೆಸರು ಸೇರಿಸಿದಿನಿ. ನನ್ನ ಪೂರ್ಣ ಹೆಸರು ಮೋಹನ್ ಹಾದಿಕೆರೆ. ಹಾದಿಕೆರೆ ಎಲ್ಲಿ ಬರುತ್ತೆ ಅಂತ ನನಗೆ ಗೊತ್ತು ನಿಮಗೆ ಗೊತ್ತು ಆದರೆ ಗೊತ್ತಿಲ್ಲದೆ ಇರೊರಿಗೆ ಗೊತ್ತು ಮಾಡಬೇಕಲ್ಲಾ.....ನಮ್ಮೂರು ತರಿಕೆರೆ ಅನ್ನೊ  ಸಣ್ಣ ಪಟ್ಟಣದ ಪಕ್ಕ. ತರಿಕೆರೆ ಅಂದ ಕೂಡಲೆ ನಮ್ಮ ಅಪ್ಪಟ ಕನ್ನಡಿಗರಿಗೆ ಪಟ್ಟನೆ ಹೊಳೆಯೊದು ಎನೊ ಅಂತೀರಾ ..
ತರಿಕೆರೆ ಏರಿಮೇಲೆ ಮೂರು ಕರೀ ಕುರಿಮರಿಗಳು ಮೇಯ್ತಾ ಇದ್ವಂತೆ ಅಂತ. ಪಾಪ ಅದ್ಯಾವ ಪುಣ್ಯಾತ್ಮ ನೊಡಿದ್ನೊ ಕುರಿಗಳು ಮೇಯ್ತಾ ಇರೊದ್ನ ಅವನಿಗೆ ಒಂದು ನಮಸ್ಕಾರ.

ತರೀಕೆರೆ ಎಲ್ಲಿ ಬರತ್ತೆ ಅಂತ ನಮ್ಮ ಬಹಳ ಕರ್ನಾಟಕದ ಜನರಿಗೆ ಗೊತ್ತಿಲ್ಲ. ನಿಮಗೆ ಈಗ ಗೊತ್ತಾಗಿರಬೇಕು ನಾನು ಗೊತ್ತಿಲ್ಲದೆ ಇರೊದ್ನ ಗೊತ್ತು ಮಾಡೀನೆ ಮುಂದೆ ಹೊಗೋದು ಅಂತ. ಕಾಫಿಯ ನಾಡು ನಮ್ಮ ಚಿಕ್ಕಮಗಳೂ ರು ಜಿಲ್ಲೆಯಲ್ಲಿ.
ನಾನು ಹತ್ತನೇ ತರಗತಿ ತನಕ ಓದಿದ್ದು ನಮ್ಮೂರಲ್ಲೆ. ಅದೂ ಕನ್ನಡ ಮಾಧ್ಯಮದಲ್ಲಿ. ಯಾಕಪಾ ಇವನು ಇದನ್ನೇ ಲ್ಲಾ ಹೇಳುತ್ತಾ ಇದಾನೆ ಅಂತೀರಾ ...ನಾ ಏನೆನು ಬರೆದಿರೊದು ಬರೆಯಬೇಕು ಅಂದ್ಕೊಂಡಿರೊದು ನಾ ೧೦ ನೆ ತರಗತಿಯವರೆಗೆ ಕನ್ನಡದಲ್ಲೇ ಓದಿದ್ದೆ ಕಾರಣ ಅಂತ ಹೆಳೋಕೆ ಒಂತರಾ ಖುಷಿ ಮತ್ತು ಹೆಮ್ಮೆಯ ವಿಚಾರ.
ಮುಂದಿನ ಅಂಕಣದವರೆಗೆ ಕಾಯ್ತಿರಾ ....
ಕೇಳೊದೇನು ಕಾಯಲೇಬೇಕು ಯಾಕಂದರೆ ನಂಗೆ ನಿಮಗೆ ದಿನಕ್ಕೆ ಇರೋದು ೨೪ಗಂಟೆ. ಬರಿಯೊದೊಂದೆ ನನ್ನ ಕೆಲಸ ಅಲ್ವಲಾ ...ಸರಿ ...ಕಾಯ್ತಾ ಇರೀ.....